ಬಸವ ಜಗದ ನಾಯಕ
ಅಲ್ಲ ಬಸವಣ್ಣ
ಕೆಪಿಸಿಸಿ ವಕ್ತಾರ
ಅಲ್ಲ ಅಲ್ಲ
ಕೇಶವ ಕೃಪಾದ
ಕರಸೇವಕ
ಅಲ್ಲ ಬಸವಣ್ಣ
ಅಗ್ರಹಾರದ ವೈದಿಕ
ಅಲ್ಲ ಬಸವಣ್ಣ
ಮಠದ ಸೇವಕ
ಸತ್ಯ ಸಮತೆ ಶಾಂತಿ ಪ್ರೀತಿ
ಬಸವ ಜಗದ ನಾಯಕ
ಅಪ್ಪ ಅಣ್ಣ ಬಸವ ತಂದೆ
ಹೊಸ ಬದುಕಿನ ವಿಧಾಯಕ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ