ಆಯ್ದಕ್ಕಿ ಮಾರಯ್ಯ  ಶರಣರಲ್ಲೊಬ್ಬ

ಆಯ್ದಕ್ಕಿ ಮಾರಯ್ಯ 

ಶರಣರಲ್ಲೊಬ್ಬ
ಶರಣ

ಶ್ರಮ ಸಂಸ್ಕ್ರತಿ ಗಟ್ಟಿಗ
ದುಡಿದು ಹಂಚುವ ದಾಂಡಿಗ
ಸತ್ಯ ಸಮತೆಯ ಯೋಧ

ಅಂದಂದಿನ ಕಾಯಕ ಅಂದಂದು
ಶುದ್ಧರಾಗಬೇಕೆಂದ
ಶರಣ ;

ಲಿಂಗ ಜಂಗಮ ನಿಷ್ಠೆ
ತೋರಿದ ಶರಣ ;

ಅಮರೇಶ್ವರಲಿಂಗ
ನಾಮವ ಹೊಂದಿದ
ಶರಣ ;

ಕಾಯಕದಲ್ಲಿ ನಿರತನಾದರೆ
ಗುರುದರ್ಶನವಾದರೂ

ಮರೆಯಬೇಕೆಂದ ;

ಜಂಗಮ ಮುಂದಿದ್ದರೂ
ಹಂಗು ಹರೆಯ ಬೇಕೆಂದ;

ಕಾಯಕನಿಷ್ಠೆಯ ಜಗಕೆ

ತೋರಿದ ಶರಣ;

ಬೇರಾರೂ ಅಲ್ಲ

ಆತ

ಆಯ್ದಕ್ಕಿ ಮಾರಯ್ಯ

ಶರಣರಲ್ಲೊಬ್ಬ
ಶರಣ

ಮಂಜುಳಾ ಅಂಗಡಿ ಬಾಗಲಕೋಟೆ

Don`t copy text!