(ಪೆಬ್ರುವರಿ-೧೮ ಹರ್ಡೇಕರ_ಮಂಜಪ್ಪನವರು ಜನ್ಮ_ದಿವಸ ಸ್ಮರಣೆಗಾಗಿ)
ಶರಣ_ಸಂದೇಶ ಸಾರಿದ ಹರ್ಡೇಕರ ಮಂಜಪ್ಪನವರು
ಪತ್ರಕರ್ತ, ಪತ್ರೀಕೋದ್ಯಮಿ,ಕನ್ನಡದ ಶ್ರೇಷ್ಠ ಬರಹಗಾರ,ಶ್ರೇಷ್ಠ ಸನ್ಯಾಸಿ, ಪರಮ ರಾಷ್ಟ್ರಭಕ್ತ, ಬಸವೇಶ್ವರರ ಮತ್ತು ಗಾಂಧಿ ವಿಚಾರದಾರೆಗಳ ನಿಷ್ಠುರ ಅನುಯಾಯಿ, ರಾಷ್ಟ್ರೀಯ ವಿಚಾರದಾರೆಗಳ ಪ್ರೇರಣಾದಾಯಿ ವ್ಯಕ್ತಿತ್ವ ಹೊಂದಿದ ಹರ್ಡೇಕರ ಮಂಜಪ್ಪನವರ ಜನ್ಮದಿನ ಪೆಬ್ರವರಿ ೧೮,ಆ ಕಾರಣ ಲೇಖನ..
ಉಪ್ಪು ,ಖಾರ,ಸಿಹಿ ಪದಾರ್ಥಗಳುನ್ನು ಸೇವಿಸಿದರೆ ಬ್ರಹ್ಮಚರ್ಯ ಪಾಲನೆ ಕಷ್ಟ ವೆಂದು ಅವೆಲ್ಲವನ್ನು ವರ್ಜನೆ ಮಾಡಿ ಯಾವ ಶ್ರೆಷ್ಠ ಮಠಾದೀಶರಿಗೂ ಕಡಿಮೆ ಇಲ್ಲದ ಶ್ರೇಷ್ಠ ಬದಕು ನಿರ್ವಹಿಸಿದವರು ಹರ್ಡೆಕರ ಮಂಜಪ್ಪನವರು .
೧೮೮೬ ರಲ್ಲಿ ಬನವಾಸಿಯಲ್ಲಿ ಜನನ. ಅಣ್ಣನ ಆರೈಕೆಯಲ್ಲಿ ಬೆಳೆದವರು. ಮುಲ್ಕಿ ಪರೀಕ್ಷೆ ಪಾಸಾಗಿ ಕಲಿತ ಶಾಲೆಯಲ್ಲಿ ಶಿಕ್ಷಕರಾದರು. ಮನಸ್ಸಿನ ವಿಚಾರ ಬಲಿಷ್ಠವಾದ ಹಾಗೆ ದೇಶ ಸೇವೆಯ ಹುಚ್ಚು ಹಿಡಿಸಿಕೂಂಡು ಬನವಾಸಿಯಿಂದ ಡಾವಣಗೆರೆಗೆ ಬಂದು ಧನುರ್ದಾರಿ ಪತ್ರಿಕೆ ಪ್ರಾರಂಬಿಸಿದರು.
ಇ ಮೂಲಕ ತಿಲಕರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿ ಮತ್ತು ತಿಲಕರನ್ನು ಕನ್ನಡಿಗರಿಗೆ ಪರಿಚಯಿಸಿದವರು ಹರ್ಡೆಕರ ಮಂಜಪ್ಪನವರು.
ಧನುರ್ಧಾರಿ ಪತ್ರಿಕೆ ಬರವಣಿಗೆ ನೀಷ್ಠುರ ವಾದ ಕಾರಣ ಧನುರ್ದಾರಿ ಪತ್ರಿಕೆ ಮುದ್ರಣಕ್ಕೆ ಮುದ್ರಣ ಮಾಲಿಕರು ಹೆಚ್ಚು ಹಣಕೇಳಿದಾಗ ಅಸಾಹಾಯಕರಾದ ಹರ್ಡೆಕರ ಮಂಜಪ್ಪನವರು ಪ್ರಾರಂಬಿಸಿದ “ಧನುರ್ದಾರಿ” ಪತ್ರಿಕೆ ನಿಂತು ಹೋಯಿತು.
೧೯೦೮ರಲ್ಲಿ ಸ್ವಂತ ಮುದ್ರಣಾಲಯ ಹಾಕಿ ಪತ್ರಿಕೆ ಪ್ರಕಟಿಸಿದರು. ಇವರ ಪತ್ರಿಕೆ ಮೈಸೂರು_ರಾಜ್ಯದ_ದಿವಾನ ಮಾದವರಾಯನ ಕಣ್ಣು ಕುಕ್ಕಿ ಪತ್ರಿಕೆ ಮುದ್ರಣಕ್ಕೆ ನಿಷೇದ ಹೆರಿದ. ಇದೂಂದು ಅಂತರಾಜ್ಯ_ಸಮಸ್ಯೆಯಾಗಿ ಉಲ್ಬಣವಾಯಿತು.ಕಾರಣ ಆಗ ಮೈಸೂರು ಅರಸರು ಬ್ರಿಟಿಷ್ ರ ಜೋತೆ ಹೂಂದಾಣಿಕೆ ಇತ್ತು…ಇವರ ಪತ್ರಿಕೆಯಲ್ಲಿ ಬ್ರಿಟಿಷ್ ವೀರೋದಿ ಲೇಖನಗಳೆ ಇರುತ್ತಿದ್ದವು…
ಇಷ್ಟೇಲ್ಲಾ ಮಾಡಿದರೂ ಹೂಟ್ಟೆ ತುಂಬಲಿಲ್ಲ ಆದರೆ ಇದು ಅವರಿಗೆ ಸಮಸ್ಯೆ ಯಾಗಲಿಲ್ಲ ಕಾರಣ ಅವರು ಭಾರಿ ಮೀತ ಆಹಾರಿಯಾಗಿದ್ದರು.ದಾವಣಗೆರೆ ಯಲ್ಲಿ ಪ್ಲೇಗ್ ರೋಗ ಬಂದಾಗ ಜನ ತೀರಿಕೂಂಡಾಗ ಅಂತ್ಯಕ್ರಿಯೆಗೆ ಜನ ಬರದೇ ಇದ್ದಾಗ ಮುಂದೆ ನಿಂತು ಅಂತ್ಯಕ್ರಿಯೆ ಮಾಡುತ್ತಿದ್ದರು..
ತುಂಗಭದ್ರಾ ನದಿಯ ದಂಡೆಯ ತಮ್ಮ ಸ್ನೇಹಿತನ “ಬಾಳಪ್ಪನ ಜಮೀನಿನಲ್ಲಿ ಆಶ್ರಮ ಮಾಡಿಕೂಂಡು ಜೀವನ ಸಾಗಿಸಿದರು.ತಮ್ಮ ತಾಯಿಯ ನಿಧನದ ನಂತರ ಇಡಿ ಕರ್ನಾಟಕದ ಹಳ್ಳಿಗಳನ್ನು ಸಂಚರಿಸಿ ಬಾಗಲಕೋಟೆಯ ಆಲಮಟ್ಟಿಯಲ್ಲಿ ಆಶ್ರಮ ಸ್ಥಾಪಿಸಿ “ಶರಣ_ಸಂದೇಶ “ಪತ್ರಿಕೆ ಪ್ರಾರಂಬಿಸಿದರು.
೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೇಸ್ ಅದೀವೇಶನ ನಡೆದಾಗ ಬಸವ ಸೇವಾದಳ ಸ್ಥಾಪಿಸುವ ಮೂಲಕ ೧೯೨೪ ಬೆಳಗಾವಿಯ ಕಾಂಗ್ರೆಸ ಅಧಿವೇಶನ ಯಶಸ್ವಿಯಾಗಿ ನೆರವೆರಲು ಕಾರಣಿಭೂತರಾದರು..ಗಾಂಧಿಯವರ ಆತ್ಮೀಯ ವಲಯದಲ್ಲಿ ಇದ್ದರೂ ಗಾಂದಿಜೀಯವರ ವಿಚಾರಗಳನ್ನು ಕೆಲವೊಮ್ಮೆ ವೀರೂದಿಸಿದ್ದರು..
ಗಾಂದಿಜೀಯವರು ಶೋಷೀತ ಜನಸಮುದಾಯದವರನ್ನು ಹರಿಜನರು” ಏಂದು ಕರೆದಾಗ ವಿರೋದಿಸಿದರು ಕಾರಣ ಶೂಷಿತ ಜನಾಂಗ ಆಗಿನ ಕಾಲದಲ್ಲಿ ಶಿವನ ಆರಾದಕರಾಗಿದ್ದರೆ ಹೂರತು ವಿಷ್ಣುವಿನ ಆರಾದಕರಾಗಿರಲಿಲ್ಲ..ಪ್ರಸ್ತುತದಲ್ಲಿ ಇ ವಿಷಯ ಅವಶ್ಯವಿಲ್ಲ.
ಪ್ರಥಮವಾಗಿ ಸಾರ್ವಜನಿಕವಾಗಿ ಬಸವ_ಜಯಂತಿ ಆಚರಣಗೆ ೧೯೧೩ರಲ್ಲಿ ೧೯೩೫ ಸ್ರ್ರಿಯರ_ಜಾಗೃತಿಗೆ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಿದರು.
ಆರ್ಥಿಕ ಸಬಲೀಕರಣಕ್ಕೆ””ರಾಟಿ_ಸಂಘ”” ಸ್ಥಾಪಿಸಿದರು.೧೯೨೪ ರಲ್ಲಿ ಬಸವೇಶ್ವರ ಸೇವಾದಳ ಸ್ಥಾಪಿಸಿದರು. ಖಾದಿ_ವಿಜಯ ಮತ್ತು ಉದ್ಯೋಗ ಪತ್ರಿಕೆ ಸಂಪಾದಿಸಿ ಪ್ರಕಟಿಸಿದರು…
ಕಳೆದ_ನನ್ನ_ಮೂವತ್ತು_ವರ್ಷಗಳ_ಕಾಣಿಕೆ_ಆತ್ಮ ಚರಿತ್ರೆ_ಬರೆದರು_ಇದು_ಕನ್ನಡದ_ಮೊದಲ ಆತ್ಮಚರಿತ್ರೆ.
ಇವರ ಜನ್ಮದಿನದ ಸಂದರ್ಭದಲ್ಲಿ ಇವರ ವಿಚಾರದಾರೆಗಳು ನಮ್ಮ ಬದುಕಿಗೆ ಆದರ್ಶ ವಾಗಲಿ…
ಲೇಖನ: ಮಹೇಶ ನೀ ಚನ್ನಂಗಿ.
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರು.
9740313820