ಕನ್ನಡದ ಜಗದ್ಗುರು

ಕನ್ನಡದ ಜಗದ್ಗುರು

 

 

 

 

 

 

 

 

 

 

ಕನ್ನಡಕ್ಕೊಬ್ಬರೆ ಕನ್ನಡದ ಕಣ್ವ ಬಿ.ಎಂ.ಶ್ರೀ
ಒಬ್ಬರೆ ಕನ್ನಡದ ಜಗದ್ಗುರು ತೋಂಟದ ಶ್ರೀ

ಕಲೆ ಸಾಹಿತ್ಯ ಸಂಸ್ಕೃತಿ ಉತ್ತಿ ಬಿತ್ತಿ ಬೆಳೆದರು
ವಚನ ಪಲ್ಲಕ್ಕಿ ಮೆರವಣಿಗೆ ಮಾಡಿ ಹೆಸರಾದರು
ಮಠ ಮಸಿದಿ ಚರ್ಚಗಳನು ಒಂದು ಮಾಡಿದವರು
ವಿಶ್ವಭಾತೃತ್ವ ಜಗಕೆ ಸಾರಿ ಭಾವೈಕ್ಯತೆ ತಂದವರು

ತ್ರಿವಿಧ ದಾಸೋಹಿ ಚಳುವಳಿಗಳ ದಂಡನಾಯಕ
ಕಂದಾಚಾರ ಮೂಢನಂಬಿಕೆಗಳ ಸಂಹಾರಕ
ಸರ್ವ ಸಮಾನತೆಯ ಸಮಾಜ ಸುಧಾರಕ
ಜಗಕ್ಕೆಲ್ಲ ಮಾತೃ ಹೃದಯದ ದ್ಯೋತಕ

ನ್ಯಾಯ ನಿಷ್ಠುರಿ ಹೊಂದಾಣಿಕೆ ಬಯಸದ ಸಂತ
ಶಿವಾನುಭವಗಳನು ಮುಂಚೂಣಿಗೆ ತಂದ ದೂತ
ವೈಚಾರಿಕ, ವೈಜ್ಞಾನಿಕ ಚಿಂತನೆಯ ಬಸವ ಸಂಜಾತ
ಸದಾ ಕಾಲ ಬಯಸಿದಿರಿ ನೀವು ಬಡ ಭಕ್ತರ ಹಿತ

ಮರಣವೇ ಮಹಾನವಮಿ ಎಂದು ಅಂದೇ ಅಸ್ತಂಗತ
ಅನಾಥರಾದೆವು ಅಂದಿನಿಂದ ತಂದೆ ಬಸವ ಪ್ರಣೀತ
ಮಠದ ಭಕ್ತರಾಗಿರುವರು ಇಂದಿಗೂ ದಿಗ್ಭ್ರಾಂತ
ಮಾಡಿ ಹೋದಿರಿ ನೀವು ಮಠವ ಜಾತ್ಯಾತೀತ

ರವೀಂದ್ರ.ಆರ್.ಪಟ್ಟಣ
ಮುಳಗುಂದ —- ರಾಮದುರ್ಗ
9481931842

Don`t copy text!