ಜಗವು ಬಸವನ ವಶವು

ಜಗವು ಬಸವನ ವಶವು

 

 

 

 

 

 

 

 

 

 

ಸತ್ಯ ಸಮತೆಯ ಭಾಷೆ
ಶ್ರಮಿಕ ಶೋಷಿತರ ಆಶೆ
ಮುಕ್ತತೆ ಮನುಕುಲಕೆ
ಬಸವನ ಅಭಿಲಾಷೆ .
ಮೇಲು ಕೀಲುಗಳಿಲ್ಲ.
ವೇದ ಘೋಷಣೆಯಿಲ್ಲ.
ಶಾಸ್ತ್ರ ಪುರಾಣ ಕಾಟವಿಲ್ಲ .
ಬಲಿ ಓಕುಳಿ ರಕ್ತ ಕಲೆಯಿಲ್ಲ .
ಉತ್ಸವ ಮೇಳ ಸದ್ದು ಗದ್ದಲವಿಲ್ಲ .
ಅಡಿಗಡಿಗೆ ಅರಿವು
ಅನುಭಾವದ ಮನವು .
ಗುರು ಲಿಂಗ ಜಂಗಮವು
ಶರಣರ ಸೂಳ್ನುಡಿಯು .
ಕಾಯಕ ದಾಸೋಹ
ಸಮ ಬಾಳು ಸಮ ಪಾಲು
ಈ ನೆಲಕೆ ಸಿಕ್ಕಿತು ಅಧ್ಯಾತ್ಮದ ಸಂಸತ್ತು .
ಸಾಹಿತ್ಯ ಸಿದ್ಧಾಂತ ನಮ್ಮಯ ಸಂಪತ್ತು
ದುಡಿವರಿಗೆ ಮಾತ್ರ ಬದುಕುವಾ ಹಕ್ಕು
ಶರಣರು ಮುರಿದರು ವಿಪ್ರರ ಸೊಕ್ಕು .
ಜಗದೇಳಿಗೆ ನೋಡು ಕಲ್ಯಾಣ ಕ್ರಾಂತಿ .
ದಲಿತರು ನಾಯಕರು ವಿಶ್ವ ಶಾಂತಿ .
ಅಷ್ಟ ದಿಕ್ಕಿನಲ್ಲಿ ಮೆರೆದಾವೋ
ಶರಣರ ವಚನಗಳು .
ಜಗಕೆಲ್ಲ ಅಕ್ಕರೆ
ಅಣ್ಣ ಬಸವನು ಸಕ್ಕರೆ .
ಎಲ್ಲೆಡೆ ಮೊಳಗುತಿದೆ ಸಮತೆ ಪರವು .
ನೋಡು ನೋಡು ಕೊನೆಗೊಮ್ಮೆ
ಜಗವು ಬಸವನ ವಶವು .

 

 

 

 

 

 

 

 

 

 

ಡಾ.ಶಶಿಕಾಂತ.ಪಟ್ಟಣ -ಪೂನಾ

Don`t copy text!