ಅವೌಪ್ಪಗಳ ನುಡಿಯು
ಬಿಟ್ಟು ಹೋಗಲು ಅವ್ವ ದಟ್ಟಡವಿಯ ಜನರಲಿ ನಿಬಿಡದೊಳಗೆ ,
ಹೊತ್ತ ಜವಾಬ್ದಾರಿಯ ಅರಿತೆ
ಅವ್ವ ಕಲಿಸಿದ ಪಾಠ
ಹಸಿವನ್ನು ಅರಗಿಸಲು ಅರಗಿಸಿದ ನೊರೆ ಹಾಲ ಕರೆಯಲು,
ಹೊತ್ತ ಜವಾಬ್ದಾರಿಯು ಹೆಗಲಲಿ ಹೊತ್ತ ಮೇಲಿನ ಭಾರ ವಿಧಿಯಿಲ್ಲ,
ಆಕಾಶ ಹೊದಿಕೆ ನೆಲವೆ ಹಾಸಿಗೆ
ಹೊಚ್ಚಲು ಹಾಸಲು ನನ್ನ ವಿಧಿಯಾಟವೇನೋ ಮೇಲಿದ್ದ ಅವ್ವ ನೆರಳಿಗೆ ಬಂದಂತೆ ಸೂರು ,
ಕಲಿಯಲು ಸಾಲಿ ಕಲಿಸಲು ಆರಿಲ್ಲ ಅವ್ವ ಕಲಿಸಿದ ಪಾಠ
ಶಾಲೆ ಗುರುವಾಗಿರಲೂ ಪಾಟೀಚೀಲಗಳಿಲ್ಲದ ಹೊರೆ ,
ಹಸಿವು ಕಾಡುತಿರಲು ಹೊತ್ತೇನ್ನ ತನುಮನ ಬೇಡಲು ಹರೆಯಿಲ್ಲದೆ ಚಿಂತೆ
ಬೇಡಿ ಉಣಲು ಹಸಿದ ನಾಯಿಗಳು ಮಂದಿಯ ಕಾಟ ಬೆನ್ನತ್ತಲು ,
ಊಹಿಸದಿರಿ ಆರೂ ಎನ್ನ ಭವಣೆಯ ವಿರೂಪವ ,
ಅವ್ವ ಅಪ್ಪ ಬಿಟ್ಟು ಹೋದ ಬದುಕನು ಮೇಲ್ ಕುಳಿತು ಅಳುತಿದ್ದರೋ ,ನಗುತಿದ್ದರೋ ,
ಕಲಿಸಿ ಹೋದ ಪಾಠವನು ನಂಬಿ ,
–ಶಾಂತಪ್ಪ ನಿವೃತ್ತ ಪಿಎಸ್ಐ ಗಂಗಾವತಿ