ಸರ್ಕಾರ ಸತ್ತು ಹೋಗಿದಿಯಾ? ಅಧಿಕಾರಿಗಳಿಗೆ ಕಣ್ಣು, ಕಿವಿ, ಹೃದಯ ನಿಷ್ಕ್ರಿಯವಾಗಿವೆಯೆ?

ಸರ್ಕಾರ ಸತ್ತು ಹೋಗಿದಿಯಾ? ಅಧಿಕಾರಿಗಳಿಗೆ ಕಣ್ಣು, ಕಿವಿ, ಹೃದಯ ನಿಷ್ಕ್ರಿಯವಾಗಿವೆಯೆ?

 

 

 

 

 

 

 

 

 

 

ಸರ್ಕಾರಿ ಅಧಿಕಾರಿಗಳಿಗೆ ತಾವು ಅಧಿಕಾರಿಗಳೆಂಬ ಕೊಂಬು ಬಂದಿದೆ ಎಂದು ಮತ್ತೊಮ್ಮೆ ಸಾಭಿತಾಗಿದೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ನಿಡಗುಂದಿ ಶಾಲೆಯ ಪ್ರಭಾರಿ ಮುಖ್ಯಗುರು ವೀರಣ್ಣ ಮಡಿವಾಳ ಅವರು ತಮ್ಮ ಶಾಲೆಗೆ ಬೇಕಾಗುವ ಶಾಲ ಕೊಠಡಿಗಳನ್ನು ಮಂಜೂರು ಮಾಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ವಾಗದೆ ಇದ್ದಾಗ ಅನಿವಾರ್ಯ ವಾಗಿ ಶಾಲ ಮಕ್ಕಳೊಂದಿಗೆ ಬಿ.ಇ.ಒ ಕಚೇರಿ ವರೆಗೆ ೧೫ ಕಿ.ಮೀ. ವರೆಗೆ ಪಾದಯಾತ್ರೆ ಮಾಡಿ ಪ್ರತಿಭಟನೆ ಮಾಡಿದ್ದು ತಪ್ಪು ಎಂದು ಬಾವಿಸಿರುವ ಬಿ.ಇ.ಒ‌ ಅವರು ವೀರಣ್ಣ ಮಡಿವಾಳ ಅವರನ್ನು‌ ಅಮಾನತು ಮಾಡಿರುವುದು ಯಾವ ಪುರುಷಾರ್ಥಕ್ಕೆ?
ನಿಡಗುಂದಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿದ್ದು ವೀರಣ್ಣ ಮಡಿವಾಳ ಅವರ ಅಪರಾಧವೆ?
೭೫ ವಿದ್ಯಾರ್ಥಿಗಳು ಇದ್ದ ಶಾಲೆ ೧೫೦ ಮಕ್ಕಳು ಬರುವಂತೆ ಮಾಡಿದ್ದು ತಪ್ಪೆ?
ಹಲವು ಹತ್ತು ಪ್ರಯೋಗಗಳಿಗೆ ಈಡು ಮಾಡಿ ಶಾಲೆಯನ್ನು ಪಾಲಕರ ನೆರವಿನೊಂದಿಗೆ ಸುಂದರ ಗೊಳಿಸಿ ರಜಾ ದಿನಗಳಲ್ಲಿ ಮಕ್ಕಳು ಶಾಲೆಗೆ ಬರುವಂತೆ ಮಾಡಿದ್ದು ತಪ್ಪೆ?
ಒಬ್ಬ ಶಿಕ್ಷಕ ತನ್ನ ಜವಾಬ್ದಾರಿ ಅರಿತು ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಹೊತ್ತುಕೊಂಡು ಕಾಲಹರಣ ಮಾಡದೆ ಸದಾ ಶಾಲೆ, ಮಕ್ಕಳು, ಸಾಹಿತ್ಯ, ಸಮಾಜದ ಬಗ್ಗೆ ಕಳಕಳಿ ಇರುವ ಶಿಕ್ಷಕನನ್ನು ಬೆಂಬಲಿಸುವ ಬದಲು ಬಿ.ಇ.ಒ ಅವರು ತಾವು ಅಧಿಕಾರಿ ಎಂಬ ಹಮ್ಮಿನಿಂದ ಅಮಾನತು ಮಾಡುವ ದರ್ಪ ತೊರಿಸುವುದು ಶಿಕ್ಷಣ ಇಲಾಖೆ ಒಳ್ಳೆಯದಲ್ಲ.
ಕಾಲ ಮಿಂಚಿಲ್ಲ.
ಬಿಇಒ ಅವರು  ಅಮಾನತ್ತು ಆದೇಶ ಹಿಂಪಡೆಯಬೇಕು. ಶಿಕ್ಷಕ ವೀರಣ್ಣ ಮಡಿವಾಳ ಅವರ ಒಳ್ಳೆಯ ಕೆಲಸಗಳಿಗೆ ಬೆಂಬಲಿಸಬೇಕು. ಆ ಮೂಲಕ ಶಿಕ್ಷಣ ಕ್ಷೇತ್ರದ ಪಾವಿತ್ರ್ಯವನ್ನು ಕಾಪಾಡಬೇಕೆಂಬುದು ಶಿಕ್ಷಣ ಪ್ರೇಮಿಗಳ ಒತ್ತಾಯ, ಆಗ್ರಹ, ಕಳಕಳಿಯಾಗಿದೆ. ಬಿಇಒ ಅವರು ನಿಷ್ಕಲ್ಮಷ ಭಾವದೊಂದಿಗೆ ಪಾರಂಬರಿಸಿ. ಸೂಕ್ತ ನಿರ್ಣಯ ತೆಗೆದುಕೊಳ್ಳಿ.

ಸಂಪಾದಕ
e-ಸುದ್ದಿ
ಅಂತರ್ಜಾಲ ಪತ್ರಿಕೆ, ಮಸ್ಕಿ

Don`t copy text!