ಹುಟ್ಟು ಕವಿಗಳು
ಹುಟ್ಟು ಕವಿಗಳು
ಸತ್ತು ಹೋದರು
ಮತ್ತೆ ಬಾರದ
ಊರಿಗೆ
ಸತ್ಯವನ್ನು ಹೊತ್ತು
ನಡೆದರು
ನಿತ್ಯ ಬದುಕಿನ
ಹೆಜ್ಜೆಗೆ
ದುಃಖ ಕಷ್ಟ
ನೋವು ನಷ್ಟ
ತೀವಿತ ತಲ್ಲಣ
ಬಾಳಿಗೆ
ಬರೆದ ಭಾಷೆ
ಭಾವನರಿಯದೆ
ಗುಲ್ಲು ಎಬ್ಬಿಸಿ
ಕುಣಿದರು
ಸಮತೆ ಶಾಂತಿ
ಪ್ರೀತಿ ಮಂತ್ರ
ಸತ್ಯ ಹೇಳಿದ
ಕವಿಗೆ ಗಲ್ಲು ಹಗ್ಗದ
ಕುಣಿಕೆಯು
ಭೃಷ್ಟರಿರುವ ನೆಲದ ಮೇಲೆ
ಇರದು ಬೆಲೆ
ಕವಿಯ ಹೃದಯಕೆ
-ಡಾ ಶಶಿಕಾಂತ ಪಟ್ಟಣ ರಾಮದುರ್ಗ