ಕರ್ನಾಟಕದಲ್ಲಿ ಲಿಂಗಾಯತ ಅಲ್ಪ ಸಂಖ್ಯಾತ ಸವಲತ್ತು ಪಡೆಯಬಹುದೇ ?
ಕರ್ನಾಟಕದಲ್ಲಿ ಎಲ್ಲ ಲಿಂಗಾಯತ ಸಂಘಟನೆಗಳು ಮಠಾಧೀಶರು ರಾಜಕಾರಣಿಗಳು ನಿವೃತ್ತ ಅಧಿಕಾರಿಗಳ ನಿರಂತರ ಪ್ರಯತ್ನದಿಂದ ಕರ್ನಾಟಕದ ಹಿಂದಿನ ಮುಖ್ಯ ಮಂತ್ರಿಗಳು ಶ್ರೀಮಾನ್ ಸಿದ್ದರಾಮಯ್ಯನವರು ನ್ಯಾಯ ಮೂರ್ತಿ ನಾಗಮೋಹನ ದಾಸ ಅವರ ತಜ್ಞರ ಸಮಿತಿ ರಚಿಸಿ ಲಿಂಗಾಯತ ವೀರಶೈವರ ಧಾರ್ಮಿಕ ಹಕ್ಕಿನ ಇತ್ಯರ್ಥ್ಯಕ್ಕೆ ದಾರಿ ಮಾಡಿಕೊಟ್ಟರು..ತಜ್ಞರ ಸಮಿತಿ ಎರಡೂ ಪಕ್ಷದವರ ಅರ್ಜಿ ಪುರಾವೆ ದಾಖಲೆಗಳನ್ನು ಪರಿಶೀಲಿಸಿ ಸಮಿತಿಯು ಲಿಂಗಾಯತ ಮತ್ತು ವೀರಶೈವ ಲಿಂಗಾಯತರು (ಬಸವ ತತ್ವದಲ್ಲಿ ನಂಬಿಕೆ ಇಟ್ಟವರು )ರಾಜ್ಯ ಅಲ್ಪ ಸಂಖ್ಯಾತ ಆಯೋಗದಿಂದ ಲಿಂಗಾಯತ ಧರ್ಮಿಯರಿಗೆ ಅಲ್ಪ ಸಂಖ್ಯಾತ ಸ್ಥಾನ ಮಾನವನ್ನು
( 2 D ) ತಮ್ಮ ಕ್ಯಾಬಿನೆಟ್ ನಲ್ಲಿ ಅಂಗೀಕಾರಗೊಳಿಸಿ ಲಿಂಗಾಯತ ಧರ್ಮಕ್ಕೆ ಅಲ್ಪ ಸಂಖ್ಯಾತ ಮಾನ್ಯತೆ ನೀಡಿದ್ದಾರೆ .
ಸಧ್ಯ ಪ್ರಸಕ್ತ ಸಾಲಿನಲ್ಲಿ ಕರ್ನಾಟಕದ ಮಟ್ಟಿಗೆ ಶೈಕ್ಷಣಿಕವಾಗಿ ,ಆರ್ಥಿಕವಾಗಿ ,ಧಾರ್ಮಿಕವಾಗಿ ,ಸಾಮಾಜಿಕವಾಗಿ ರಾಜಕೀಯವಾಗಿ ಉಳಿದ ಅಲ್ಪ ಸಂಖ್ಯಾತರಿಗೆ ದೊರೆಯುವ ಸವಲತ್ತುಗಳು ದೊರೆಯುತ್ತವೆಯೇ ?
1 ) ಕಾರಣ ಸಿ ಈ ಟಿ ನೀಟ್ ಪರೀಕ್ಷೆಗಳನ್ನು ಕಟ್ಟಿ ಡಾಕ್ಟರ್ ಇಂಜಿನಿಯರ್ ಆಗಬೇಕೆಂದು ಕನಸು ಕಟ್ಟಿಕೊಂಡಿರುವ ಬಡ ಮಧ್ಯಮವರ್ಗದ ಲಿಂಗಾಯತರಿಗೆ ಮಾರ್ಗ ದರ್ಶನ ಮಾಡುವವರು ಯಾರು ?.
2 ) ಒಂದು ವೇಳೆ ಲಿಂಗಾಯತ ಅಲ್ಪ ಸಂಖ್ಯಾತ ಸವಲತ್ತು ಬಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಿಗುವ ಹಾಗಿದ್ದರೆ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಕೆ ಎಲ್ ಈ ಬಿ ಎಲ್ ಡಿ ಈ
ಎಚ್ ಕೆ ಈ ,ಬಾಪೂಜಿ ಜೆ ಎಸ ಎಸ ,ಸಿದ್ಧಗಂಗಾ ಬಳ್ಳಾರಿ ವೀರಶೈವ ಸಂಘ ,ಬಾಗಲಕೋಟೆ ಬಿ ವಿ ವಿ ಸಂಘ ,ಮತ್ತು ನಾಡಿನ ಅನೇಕ ಮಠಗಳು ಲಿಂಗಾಯತ ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳೆಂದು ಇನ್ನು ಏಕೆ ನೋಂದಾಯಿಸಿಲ್ಲ.
3 ) ಪ್ರಸಕ್ತ ಸಾಲಿನಿಂದಲೇ ಲಿಂಗಾಯತ ಅಲ್ಪ ಸಂಖ್ಯಾತ ಧಾರ್ಮಿಕ ಶೈಕ್ಷಣಿಕ ಆರ್ಥಿಕ ಇತ್ಯಾದಿ ಸ್ಥಾನಮಾನಗಳ ಸವಲತ್ತಿನ ಪರಿಚಯಿಸುವ ಪುಸ್ತಿಕೆ ಮಾಹಿತಿ ನಮ್ಮ ಲಿಂಗಾಯತ ಸಂಘಟನೆಗಳು ಮಾಡಿವೆಯೇ. ಇದಕ್ಕೆ ಸಂಬಂಧ ಪಟ್ಟ ಹಾಗೆ ವಿಚಾರ ಸಂಕೀರ್ಣವನ್ನು ಇಟ್ಟುಕೊಂಡು ಸಾರ್ವಜನಿಕರಲ್ಲಿಅರಿವು ಮೂಡಿಸಬೇಕು
4 ) ಅಲ್ಪ ಸಂಖ್ಯಾತ ಮೀಸಲಾತಿ ಸ್ಕಾಲರಶಿಪ್ ಮುಂತಾದ ಸವಲತ್ತಿಗಾಗಿ ಲಿಂಗಾಯತ ಬಡ ವಿದ್ಯಾರ್ಥಿಗಳು ಪರದಾಡುವಂತಾಗಬಾರದು.
5 ) ಅಲ್ಪ ಸಂಖ್ಯಾತ ಸ್ಥಾನಮಾನ ದೊರೆತ ಅಧಿಸೂಚನೆ ಗ್ಯಾಜೆಟ್ ಮತ್ತು ಹೈ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸದ ಮೇಲೂ ಲಿಂಗಾಯತ ಮಠಗಳು ಶಿಕ್ಷಣ ಸಂಸ್ಥೆಗಳು ಏಕೆ ಮೌನವಾಗಿವೆ ? ಇದು ಅಜ್ಞಾನವೋ ಅಥವಾ ಸರಕಾರಿ ಆದೇಶವು ಇನ್ನು ಜಾರಿಯಾಗಿಲ್ಲವೋ ಎಂಬ ಅನುಮಾನವೇ ?
6 ) ಒಂದು ವೇಳೆ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಲಿಂಗಾಯತ ಅಲ್ಪ ಸಂಖ್ಯಾತ ಸ್ಥಾನಮಾನ ಪಡೆದುಕೊಂಡರೆ ರೋಸ್ಟರ್ ಇಲ್ಲವಾಗುವುದು.ಮತ್ತು ಕನಿಷ್ಠ ಪಕ್ಷ ಪ್ರತಿಶತ 50 %
ಸೀಟುಗಳನ್ನು ಲಿಂಗಾಯತ ವಿದ್ಯಾರ್ಥಿಗೆ ಕೊಡಬಹುದು.
7 ) ಆರ್ಥಿಕವಾಗಿ ದುರ್ಬಲವಾದ ಲಿಂಗಾಯತ ವಿದ್ಯಾರ್ಥಿಗಳಿಗೆ ಶೇಕಡಾ 50 % ಫಿ ಹಣವನ್ನು ರಾಜ್ಯ ಸರಕಾರವೇ ಭರಿಸಬೇಕು.
8 ) ಒಟ್ಟಾರೆ ಮುಸ್ಲಿಂ ಕ್ರೈಸ್ತ ಜೈನ ಬೌದ್ಧ ಧರ್ಮಿಯರಿಗೆ ಸಿಗುವ ಸೌಲಭ್ಯಗಳು ಲಿಂಗಾಯತ ಧರ್ಮಿಯರಿಗೆ ದೊರೆಯಬೇಕಾದದ್ದು ನ್ಯಾಯ ಸಮ್ಮತ ಮತ್ತು ಕಾನೂನು ಸಮ್ಮತವಾಗಿದೆ.
9 ) ಲಿಂಗಾಯತ ಅಲ್ಪ ಸಂಖ್ಯಾತ ಸವಲತ್ತು ಮೀಸಲಾತಿ ಮತ್ತು ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿ ತೀಕ್ಷ್ಣವಾಗಿ ಅಲ್ಪಸಂಖ್ಯಾತ ಸಂಸ್ಥೆಯನ್ನು ರಾಜ್ಯದ ಅಲ್ಪ ಸಂಖ್ಯಾತ ಆಯೋಗದಿಂದ ಪಡೆಯಬೇಕು.
10 ) ಮಹಾರಾಷ್ಟ್ರದಲ್ಲಿ ಭಾಷಾ ಅಲ್ಪ ಸಂಖ್ಯಾತ ಆಧಾರದ ಮೇಲೆ ಇಂತಹ ಸೌಲಭ್ಯಗಳನ್ನು ಅನೇಕ ಶಿಕ್ಷಣಸಂಸ್ಥೆಗಳು ಪಡೆಯುತ್ತಿವೆ .ಕಾರಣ ಎಲ್ಲ ಶೈಕ್ಷಣಿಕ ಸಂಸ್ಥೆಗಳ ಮುಖಂಡರನ್ನು ಕರೆಯಿಸಿ ಮಠಾಧೀಶರನ್ನು ಕರೆದು ಇದರ ಬಗ್ಗೆ ಸಮಗ್ರವಾಗಿ ಮಾಹಿತಿ ಕೊಟ್ಟರೆ ಬಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹಾಗೂ ಅವಕಾಶ ವಂಚಿತ ಸಮುದಾಯಕ್ಕೆ
ಲಾಭವಾಗುತ್ತದೆ .
ಇದರ ಬಗ್ಗೆ ಲಿಂಗಾಯತ ಮುಖಂಡರುಗಳು ನಿವೃತ್ತ ಹಿರಿಯ ಅಧಿಕಾರಿಗಳು ಕೂಡಲೇ ಸ್ಪಷ್ಟಿಕರಣ ಕೊಟ್ಟು ಜನರಿಗೆ ಮಾಹಿತಿ ನೀಡಿ ಸಮಾಜಕ್ಕೆ ಮಾರ್ಗದರ್ಶನ ಮಾಡುವಂತಾಗಲಿ.
ಹಸಿದ ಹೊಟ್ಟೆಯಿಂದ ಯಾರು ದೇಶ ಭಕ್ತರಾಗುವದಿಲ್ಲ.
ಈ ವಿಷಯದ ಬಗ್ಗೆ ಸಮಗ್ರವಾದ ಚರ್ಚೆಯಾಗಲಿ ಹಾಗು ಶ್ರೀ ಸಿದ್ದರಾಮಯ್ಯನವರ ಸರಕಾರವು ಹೊರಡಿಸಿದ ಈ ಮಹತ್ತರ ಆದೇಶಕ್ಕೆ ನ್ಯಾಯವು ಸಿಗುವಂತಾಗಲಿ.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರೆ ಸಾಲದು .ಬಸವ ಧರ್ಮೀಯರು ಅಲ್ಪ ಸಂಖ್ಯಾತ ಮಾನ್ಯತೆ ಪಡೆಯಬೇಕು .
ಈಗ ಅದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಾರ್ಯ ರೂಪಕ್ಕೆ ಬರಲಿ.
–ಡಾ.ಶಶಿಕಾಂತ.ಪಟ್ಟಣ
ಅಧ್ಯಕ್ಷರು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ