ಕಿಲಾರ ಹಟ್ಟಿ ತಾಂಡಾದಲ್ಲಿ ಬೆಳಕು ಯೋಜನೆಗೆ ಚಾಲನೆ.
e-ಸುದ್ದಿ ಲಿಂಗಸುಗೂರು
ಲಿಂಗಸುಗೂರು ತಾಲ್ಲೂಕಿನ ಉಪ್ಪಾರ ನಂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲಾರ ಹಟ್ಟಿ ತಾಂಡಾದಲ್ಲಿ ಶಾಸಕರಾದ ಶ್ರೀ ಡಿ.ಎಸ್ ಹುಲಿಗೇರಿ ಹಾಗೂ ರಾಯಚೂರು ಕೊಪ್ಪಳ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಜ್ಯೋತಿ ಬೆಳಗಿಸುವ ಮೂಲಕ ಬೆಳಕು ಯೋಜನೆಗೆ ಚಾಲನೆ ನೀಡಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಬೆಳಕು ಯೋಜನೆಯು ಬಡವರ ಪಾಲಿನ ಯೋಜನೆಯಾಗಿದ್ದು ಯೋಜನೆ ವತಿಯಿಂದ ತಾಲೂಕಿನ ವಿದ್ಯುತ್ ರಹಿತರ ಮನೆಗಳಿಗೆ ಉಚಿತವಾಗಿ ವಿದ್ಯುತ್ ಮೀಟರ್ ಗಳನ್ನು ಅಳವಡಿಸಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ರಾಯಚೂರು ಕೊಪ್ಪಳ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಗ್ರಾಮೀಣ ಭಾಗದ ಪ್ರದೇಶದಲ್ಲಿ ಬರುವ ವಿದ್ಯುತ್ ಸಂಪರ್ಕ ಹೊಂದಿಲ್ಲದ ಎಲ್ಲ ಮನೆಗಳಿಗೆ ಬೆಳಕು ಯೋಜನೆ ಅಡಿಯಲ್ಲಿ ವಿದ್ಯುತಿಕರಣ ಗೊಳಿಸಿ ಗ್ರಾಮೀಣ ಪ್ರದೇಶದಲ್ಲಿ ಬರುವ ವಿದ್ಯುತ್ ರಹಿತ ಬಡವರ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸುವ ಯೋಜನೆಯಾಗಿದೆ. ಪ್ರತಿಯೊಬ್ಬರಿಗೂ ವಿದ್ಯುತ್ ಬಳಕೆ ಅನಿವಾರ್ಯವಾಗಿದ್ದು ವಿದ್ಯುತ್ ಕೂಡ ಬಹಳ ಪ್ರಾಮುಖ್ಯತೆ ಪಡೆದಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ವಿದ್ಯುತ್ ಇಲಾಖೆಯ ಕೂಡ ಮಹತ್ವದ ಪಾತ್ರ ವಹಿಸಿದೆ ಎಂದರುು.
ಜೆಸ್ಕಾಂ ಸಿಂಧನೂರು ವಿಭಾಗದ ವತಿಯಿಂದ ಇಲ್ಲಿವರೆಗೂ ಒಟ್ಟು 2145 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಅದೇ ರೀತಿ ನಮ್ಮ ಲಿಂಗಸುಗೂರು ಉಪವಿಭಾಗದ ಒಟ್ಟು 780 ಫಲಾನುಭವಿಗಳಲ್ಲಿ 300ಕ್ಕೂ ಹೆಚ್ಚು ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶಕುಂತಲಾ ಪರಮೇಶ ಕನ್ನಾಪೂರಹಟ್ಟಿ, ಬಸವರಾಜಗೌಡ ಲೆಕ್ಕಿಹಾಳ, ಹೊನ್ನಪ್ಪ ಮೇಟಿ, ಶಿವಶಂಕರಗೌಡ ಉಪ್ಪಾರನಂದಿಹಾಳ, ಜೆಸ್ಕಾಂ ವಿಭಾಗ, ಉಪ ವಿಭಾಗದ ಅಧಿಕಾರಿಗಳು, ಉಪ್ಪಾರ್ ನಂದಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ತಾಂಡಾದ ನೂರಾರು ಸಾರ್ವಜನಿಕರು ಹಾಜರಿದ್ದರು.