ಸಿದ್ಧೇಶ್ವರ ಸ್ವಾಮಿಗಳು
ಮರದಡಿಯ ನೆರಳಲ್ಲಿ
ಮಗುಮನದ ಸ್ವಾಮಿಜಿ
ಮನ ಮಾಗಿ ಪರಿಪಕ್ವದಿ
ಮನಸೂರೆಗೊಂಡಿಹರು.||
ಪ್ರವಚನದಿ ಪ್ರಖ್ಯಾತರು
ಪ್ರಾತಃಸ್ಮರಣೀಯರು
ಹರನ ಪ್ರತಿರೂಪದಿ
ಧರೆಗೆ ಇಳಿದವರು ||
ಸದುವಿನಯಯದ
ಸಾಕಾರ ಮೂರ್ತಿ
ಸದ್ಯೋಜ್ಯಾತರು
ಸರಳ ವ್ಯಕ್ತಿತ್ವದವರು||
ಪದವಿ ಪ್ರಶಸ್ತಿಯ
ಮೀರಿನಿಂದವರು
ಪರಮನೊಲಿಸುವ
ಪರಿಯ ತೋರುವವರು ||
ಅಪ್ರತಿಮ ಜ್ಞಾನದ ಖನಿ
ಅದ್ಭುತ ಭಾಷೆಯ ಗಣಿ
ಮೃದು ಮಧುರ ಮಾತು
ಅರಿತವಗೆ ಗೊತ್ತು ||
ಸಾಧನೆಯ ಸಿದ್ಧಿಯ ಶಿಖರವೆ
ಸಿದ್ಧೇಶ್ವರ ಸ್ವಾಮಿಜಿ
ಇವರ ಸನ್ಮಾರ್ಗದಿ ಸಾಗೋಣ
ನಾವೆಲ್ಲ ಸೌಖ್ಯದಿ ||
–ಸವಿತಾ ಮಾಟೂರ. ಇಲಕಲ್ಲ.