ಆತ್ಮಸಾಕ್ಷಿಗೆ ಸ್ಪಂದಿಸುವಂತಹ ಹೃದಯ, ದೋಷರಹಿತವಾಗಿರುತ್ತದೆ
ಋಣಾನುಬಂಧ ಅನ್ನೋದು ಎಲ್ಲಿಯೋ ಇದ್ದವರನ್ನು, ಎಲ್ಲೋ ಇದ್ದವರ ಜೊತೆಗೆ ಸೇರಿಸಿಬಿಡುತ್ತದೆ.
ಇಂಥವರ ಜೊತೆ ಇಂತಿಷ್ಟು ದಿನ ಬಾಳು ಎಂದು ಆ ಭಗವಂತ ಮೊದಲೇ ನಿರ್ಧಾರ ಮಾಡಿರುತ್ತಾನೆ. ಆದರೆ, ನಾವು ಮಾತ್ರ ನಾವು ಹೇಳಿದಂತೆ ಆಗಬೇಕು. ನಮ್ಮ ಇಚ್ಛೆಯಂತೆ ಎಲ್ಲವೂ ನಡೆಯಬೇಕು ಅನ್ನೋ ಭ್ರಮೆಯಲ್ಲಿ ಇರುತ್ತೇವೆ. ನಾವು ಅಂದುಕೊಂಡಂತೆ ಆಗದಿದ್ದಾಗ ಇನ್ನೊಬ್ಬರ ಹೃದಯಕ್ಕೆ ನೋವುಕೊಟ್ಟು ಅವರಲ್ಲಿ ದೋಷವನ್ನು ಹುಡುಕುತ್ತೇವೆ.
ನಮ್ಮ ಜೀವನದಲ್ಲಿ ಏನು ಆಗಬೇಕು ಅದನ್ನು ಆ ಸೃಷ್ಟಿಕರ್ತ ಮೊದಲೇ ನಿರ್ಧಾರ ಮಾಡಿರುತ್ತಾನೆ. ನಮ್ಮ ಹುಟ್ಟು, ಬಾಲ್ಯ, ಯೌವನ, ಮದುವೆ, ಮಕ್ಕಳು… ಹೀಗೆ ಇರಬೇಕು ಅನ್ನೋ ನಿರ್ಧಾರ ಮೊದಲೇ ಆಗಿರುತ್ತದೆ.
ನಾವು ಪ್ರಯತ್ನ ಪಡುವುದು ವ್ಯರ್ಥ! ಎಂಬ ಭಾವನೆ ಬಂದರೂ ಹಾಗಂತ ಪ್ರಯತ್ನಪಡುವುದು ನಿಲ್ಲಿಸಲೂಬಾರದು.
ಋಣಾನುಬಂಧ ಮಾತ್ರ ಖಂಡಿತವಾಗಿ ಇರುತ್ತದೆ. ಇಲ್ಲಾಂದ್ರೆ ಈ ಜಗತ್ತಲ್ಲಿ ಎಷ್ಟೋ ಜನ ಇದ್ದರೂ ಕೂಡ ಕೆಲವರಿಗೆ ಮಾತ್ರ ನಮ್ಮ destiny ಏಕೆ ಪರಿಚಯಿಸುತ್ತದೆ. ?
ಅದಕ್ಕೆ ನಮ್ಮ ಜೀವನದ ಸುಂದರ ಪ್ರಯಾಣವು ದೇವರು ತೋರಿಸಿದ ಹೆದ್ದಾರಿಯಲ್ಲಿ ಸಾಗಬೇಕು. ನಮ್ಮ ಕರ್ಮಗಳು ನಾವು ಚೆನ್ನಾಗಿ ಇಟ್ಟುಕೊಂಡು, ಬೇರೆಯವರಲ್ಲಿ ದೋಷ ಹುಡುಕದೆ ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕೋಣ.
– ಮೇನಕಾ ಏನ್ ಪಾಟೀಲ ಬೀದರ