ಬಾನು ಮುಷ್ತಾಕ್ ಅವರ ಬಗ್ಗೆ ನಿಮಗೆಷ್ಟು ಗೊತ್ತು?

ಬಾನು ಮುಷ್ತಾಕ್ ಅವರ ಬಗ್ಗೆ ನಿಮಗೆಷ್ಟು ಗೊತ್ತು?

 

ಅದು ಸನ್ 2000 ನೇ ಇಸವಿ ಭಾನು ಮುಷ್ತಾಕ್ ಮೇಡಂ ರವರಿಗೆ ಬೆಂಕಿ ಮಳೆ ಕಥಾ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯುತ್ತದೆ, ಆಗ ಒಂದು ಪತ್ರಿಕೆಯ ಪತ್ರಕರ್ತರು ಬಾನು ಮುಸ್ತಾಕ್ ಮೇಡಂ ರವರ ಸಂದರ್ಶನ ಮಾಡಲು ಬಂದಿರುತ್ತಾರೆ.
ಅವರು ಆ ಸಂದರ್ಭದಲ್ಲಿ ಬಾನು ಮೇಡಂಗೆ ಒಂದು ಪ್ರಶ್ನೆಯನ್ನು ಮಾಡುತ್ತಾರೆ, ದಲಿತರು ದೇವಸ್ಥಾನವನ್ನು ಪ್ರವೇಶ ಮಾಡುವಹಾಗಿಲ್ಲ ಎಂಬುದನ್ನು ವಿರೋಧಿಸಿ ಅನೇಕ ದಲಿತ ಸಂಘಟನೆಗಳು ಚಳುವಳಿಗಳನ್ನು ರೂಪಿಸುತ್ತಾರೆ. ಪ್ರತಿಭಟನೆಗಳನ್ನು ಮಾಡುತ್ತಾರೆ ಹಾಗೆಯೇ ಮುಸ್ಲಿಂ ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರವೇಶ ಇಲ್ಲದಿರುವುದನ್ನು ವಿರೋಧಿಸಿ ನೀವ್ಯಾಕೆ ಹೋರಾಟ ಮಾಡಬಾರದು ?,

ಆಗ ಬಾನು ಮುಷ್ತಾಕ್ ಮೇಡಂ ರವರು ಇಲ್ಲಿ ಈ ಹೋರಾಟದ ಅವಶ್ಯಕತೆ ಇಲ್ಲ ಏಕೆಂದರೆ ಇಸ್ಲಾಮಿನಲ್ಲಿ ಮಹಿಳೆಯರು ಮಸೀದಿಯಲ್ಲಿ ನಮಾಜು ಮಾಡುವ ಹಾಗಿಲ್ಲ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ ಇದು ಕೇವಲ ಇಂಡಿಯಾ, ಬಾಂಗ್ಲಾದೇಶ , ಮತ್ತು ಪಾಕಿಸ್ತಾನಗಳಲ್ಲಿ ಮಹಿಳೆಯರ ಮೇಲೆ ಪುರುಷರ ಹೇರಿಕೆ ಎಂದು ತಮ್ಮ ಅಭಿಪ್ರಾಯವನ್ನು ಹೇಳುತ್ತಾರೆ, ಹಾಗು ಇದನ್ನು ದಕ್ಷಿಣ ಏಷ್ಯಾದ ಭಾಗಗಳಲ್ಲಿ ಮಾತ್ರ ನೋಡಲು ಸಾಧ್ಯ ಇನ್ನು ಬೇರೆ ಬೇರೆ ದೇಶಗಳಲ್ಲಿ ಮಹಿಳೆಯರು ಮಸೀದಿಗಳಲ್ಲಿ ನಮಾಜು ನೆರವೇರಿಸಲು ಅವಕಾಶವಿದೆ ಎನ್ನುತ್ತಾರೆ.

ಈ ವಿಷಯ ಪತ್ರಿಕೆಯಲ್ಲಿಯೂ ಪ್ರಕಟಗೊಳ್ಳುತ್ತದೆ, ಅಂದಿನ ದಿನಗಳಲ್ಲಿ ಇದು ವ್ಯಾಪಕವಾಗಿ ಪ್ರಚಾರ ಪಡೆಯುತ್ತದೆ ಹಿರಿಯ ಧಾರ್ಮಿಕ ಮುಖಂಡರು, ಕಟ್ಟರ್ ವಾದಿಗಳು ಬಾನು ಮೇಡಂ ಮೇಲೆ ತೀವ್ರ ಅಸಮಾಧಾನಗೊಳ್ಳುತ್ತಾರೆ, ಇದಕ್ಕೆ ಸಂಬಂಧಪಟ್ಟಂತೆ ಹಾಸನದಲ್ಲಿ ಮೂರು ಬೃಹತ್ ಮೀಟಿಂಗ್ ಗಳು ನಡೆಸಿ ಬಾನು ಮುಷ್ತಾಕ್ ಮೇಡಂ ಮೇಲೆ ಫತ್ವಾ ಜಾರಿ ಮಾಡುತ್ತಾರೆ, ಅವರನ್ನು ಸಮಾಜದಿಂದ ಬಹಿಷ್ಕರಿಸಲಾಗುತ್ತದೆ, ಬಹಿಷ್ಕಾರ ಎಂದರೆ ಯಾರು ಅವರ ಕುಟುಂಬದ ಜೊತೆ ಸಂಪರ್ಕ ಇಟ್ಟುಕೊಳ್ಳುವ ಹಾಗಿಲ್ಲ, ಮದುವೆ ಅಥವ ಶುಭ ಕಾರ್ಯಗಳಿಗೆ ಆಹ್ವಾನಿಸುವ ಹಾಗಿಲ್ಲ ಹಾಗೂ ಇವರು ಸ್ವತಃ ಮೃತರಾದರೆ ಖಬರಸ್ತಾನದಲ್ಲಿ ಅಂತಿಮ ಕ್ರಿಯೆ ಮಾಡುವ ಹಾಗಿಲ್ಲ,

ಸಾಮಾಜಿಕ ಜಾಲಾತಾಣದ ಟ್ರೋಲ್ ಗಳು ಇಲ್ಲದ ಸಮಯದಲ್ಲೇ ಟ್ರೊಲ್ ಗಳಿಗೆ ಗುರಿಯಾದವರು, ಪೋನ್ ಕರೆಗಳ ಮೂಲಕ ಬೆದರಿಕೆ ಹಾಕುವುದು ಹೀಗೆ.. ಇದರಲ್ಲಿ ಇನ್ನೊಂದು ಬೆಚ್ಚಿ ಬಿಳಿಸುವ ಘಟನೆ ಎಂದರೆ ಇದಾದ ಎರಡು ತಿಂಗಳ ನಂತರ ಅವರ ಕಚೇರಿಗೆ ಭೇಟಿಯಾಗಲು ಒಬ್ಬ ಕಟ್ಟರ್ ಧರ್ಮದ ಅಮಲೇರಿಸಿಕೊಂಡ ವ್ಯಕ್ತಿ ಚಾಕುವಿನಿಂದ ಹಲ್ಲೆ ಮಾಡುತ್ತಾನೆ ಪ್ರಾಣಾಪಯದಿಂದ ಪಾರಾಗುತ್ತಾರೆ, ವಕೀಲರಾದ ಬಾನು ಮೇಡಂ ಅವರು ಆತನ ಮೆಲೆ ಎಫ್ ಐ ಆರ್ ದಾಖಲಿಸಿ ಮೂರು ವರ್ಷ ಜೈಲುವಾಸ ಮಾಡುವಂತೆ ಮಾಡಿ ಖುದ್ದು ಅವರೇ ಅವನನ್ನು ಕ್ಷಮದಾನ ನಿಡುತ್ತಾರೆ.

ಇದನ್ನೆಲ್ಲಾ ಮೆಟ್ಟಿ ನಿಂತ ಧೀರ ಮಹಿಳೆ ಬಾನು ಮುಷ್ತಾಕ್ ಮೇಡಂ ರವರು ಕನ್ನಡ ನಾಡಿಗೆ ಇಂಡಿಯಾಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ತಂದು ಕೊಡುತ್ತಾರೆ ಒಂದು ಕಾಲದಲ್ಲಿ ಯಾರು ತಮ್ಮ ಅಭಿಪ್ರಾಯವನ್ನು ತುಳಿಯುವ ಪ್ರಯತ್ನ ಮಾಡಿದರೋ ಯಾರು ಇವರ ಸಮೂದಾಯವನ್ನು ಪಂಕ್ಚರ್ ಹಾಕುವವರು ಎಂದು ಹಿಯ್ಯಾಳಿಸಿದರೋ, ಎದೆ ಸೀಳಿದರೆ ಎರಡಕ್ಷರ ಇಲ್ಲವೆಂದರೋ ಅವರಿಗೆ ಬೂಕರ್ ಪ್ರಶಸ್ತಿ ಉತ್ತರವಾಯಿತು. ಇಂತಹ ಕೆಲ ವಿಚಾರಗಳು 2018 ರಲ್ಲಿ ನನ್ನ ಜೊತೆ ಹಂಚಿಕೊಂಡಿದ್ದರು ಆ ನೆನಪುಗಳಲ್ಲಿ ಒಂದನ್ನು ನಿಮ್ಮ ಮುಂದೆ ಇಟ್ಟಿದ್ದೇನೆ.

ಅಭಿನಂದನೆಗಳು ಮೇಡಂ ಕನ್ನಡದ ಹೆಮ್ಮೆ ನೀವು.
ಪ್ರತಿಷ್ಠಿತ ಪ್ರಶಸ್ತಿ ತರಲು ಜೊತೆಯಾಗಿ ನಿಂತ ದೀಪಾ ಭಸ್ತಿ ರವರಿಗೂ ಈ ಸಂದರ್ಭದಲ್ಲಿ ಮರೆಯುವಂತಿಲ್ಲ ನಿಮಗೆ ಧನ್ಯವಾದಗಳು

ಸಿಕಂದರ್ ಎಸ್ ಅಲಿ

Don`t copy text!