ಗಝಲ್..

ಗಝಲ್..

 

 

 

 

 

 

 

 

 

 

ಬಾಗಿಲಕ್ಕೆ ಬಂದ ಭಕ್ತರ ಕಷ್ಟಗಳ ಕಳೆದು ಬೆರೆಯುವವಳು‌ ಬನಶಂಕರಿ.
ಬಾಗಿನ ಕೊಟ್ಟು ಅರಿಸಿನ ಕುಂಕುಮ ತುಂಬುವವರ ಪೊರೆಯುವವಳು ಬನಶಂಕರಿ

ದುಷ್ಟರ ಮರ್ದನ ಶಿಷ್ಟರ ರಕ್ಷಣೆಗಾಗಿ ಸದಾ ಬುವಿಯಲಿ ಅವತರಿಸಿದಳಲ್ಲವೆ
ನಿಷ್ಠೆಯಿಂದ ಮಲ್ಲಿಗೆ,ಕೇದಿಗೆ ಪುಷ್ಪದಿ.ಪೂಜಿಸಿದರೆ ಮೆರೆಯುವವಳು ಬನಶಂಕರಿ

ಚಾಮುಂಡೇಶ್ವರಿ ನಾಮವ ಪಡೆದು ಮನೆ ಮನಗಳಲ್ಲಿ ಆರಾಧನೆ ಪಡೆದವಳು
ಮಂಡಿಗೆ, ಸಜ್ಜಿಗೆ, ಷೋಡಶ ಉಪಚಾರದಿ. ಭಾಗ್ಯವನು ಬರೆಯುವವಳು ಬನಶಂಕರಿ

ಶಾಖಾಂಬರಿ ಎನಿಸಿ. ತರಕಾರಿಗಳೆಲ್ಲವ ಧರಿಸಿ ಇಳೆಗೆ ಮಳೆಯ ತಂದವಳು
ಪೀತಾಂಬರ, ನತ್ತು,ವಡ್ಯಾನ ಭೂಷಿತೆ ಶಾಂತಿಯಲಿ ನೆರೆಯುವವಳು ಬನಶಂಕರಿ

ವೈಶಾಖ ಮಾಸದ ಜನ್ಮದಿನದ ಅಲಂಕಾರವನು ನೋಡುವುದೆ ಪುಣ್ಯವು ಜಯಾ
ಮನೋನ್ಮಯಿ ತಿಲಕಾರಣ್ಯದಿ ನೆಲೆಸಿ ನೆನೆದವರಿಗೆ ನೇತ್ರ ತೆರೆಯುವವಳು ಬನಶಂಕರಿ

 

 

 

 

 

 

ಜಯಶ್ರೀ ಭ.ಭಂಡಾರಿ.

ಬಾದಾಮಿ

Don`t copy text!