ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ೧ ಲಕ್ಷ ರೂ ಸಹಾಯ

ಮಸ್ಕಿ : ಹಳ್ಳದ ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದ ಚನ್ನಬಸವ ಮಡಿವಾಳ ಕುಟುಂಬ ಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ವಯಕ್ತಿಕ ವಾಗಿ ೧ ಲಕ್ಷ ರೂಪಾಯಿ ನೀಡಿದರು.

ಪಟ್ಟಣದ ಮುದಗಲ್ ರಸ್ತೆಯ ಹತ್ತಿರ ಇರುವ ಚನ್ನಬಸವ ಮಡಿವಾಳ ಮನೆಗೆ ಗುರುವಾರ ಭೇಟಿನೀಡಿದ ಅವರು ಚನ್ನಬಸವನ ಪತ್ನಿ ನೇತ್ರಮ್ಮಳಿಗೆ ಮತ್ತು ತಾಯಿಗೆ ಸಾಂತ್ವಾನ ಹೇಳಿದರು.


ಚನ್ನಬಸವ ನ ಹುಡುಕಾಟಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವದು ಮತ್ತು ಸರ್ಕಾರದಿಂದ ಸಹಾಯ ಸಿಗುವಂತೆ ಮಾಡಲು ಪ್ರಯತ್ನಿಸುವೆ ಎಂದು ಪ್ರತಾಪಗೌಡ ತಿಳಿಸಿದರು.
ಬಿಜೆಪಿ ಮುಖಂಡರಾದ ಮಹಾದೇವಪ್ಪ ಗೌಡ ಪಾಟೀಲ, ಅಂದಾನಪ್ಪ ಗುಂಡಳ್ಳಿ, ಪುರಸಭೆ ಸದಸ್ಯ ರವಿಗೌಡ ಪಾಟೀಲ, ಶರಣಯ್ಯ ಸೊಪ್ಪಿಮಠ ಹಾಗೂ ಇತರರು ಇದ್ದರು.

ವಧು ವರರ ಮಾಹಿತಿಗಾಗಿ ಸಂರ್ಪಕಿಸಿ

Don`t copy text!