ಮುದ್ಗಲ್ : ಪಟ್ಟಣದ ಸಾಲಿಮಠದಲ್ಲಿ ಕಳೆದ ಒಂಭತ್ತು ದಿನಗಳಿಂದ ನಡೆದ ದೇವಿ ಪುರಾಣ ಸೋಮವಾರ ಸಂಪನ್ನವಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿ ಪುರಾಣದ ಹೊತ್ತಿಗೆ ಮೆರವಣಿಗೆ ನಡೆಯಿತು.
ಸಿದ್ದಯ್ಯಸ್ವಾಮಿ ಸಾಲಿಮಠ ಸಾನಿಧ್ಯವಹಿಸಿದ್ದರು.
ಶರಣಪ್ಪ ಸಜ್ಜನ್. ಈರಣ್ಣ ಹಡಪದ. ಬಸವರಾಜ್ ಚಟ್ಟೇರ್. ಪ್ರಭು ಕಂಡಕ್ಟರ್. ವೀರೇಶ್ ಖೆನೇಡ್. ಮುತ್ತು ಬಳಿಗಾರ್.. ಅಂಬರೇಶ್ ಸುಂಕದ್ ಸೇರಿದಂತೆ ಶಾಂಭವಿ ಸಾಧ್ಬಕ್ತ ಮಂಡಳಿ ಸದಸ್ಯರು ಭಾಗವಹಿಸಿದ್ದರು.
ಶ್ರೀ ಮಠದಲ್ಲಿ ಅನ್ನ ಸಂತರ್ಪಣೆ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಎಲ್ಲರ ಗಮನ ಸೆಳೆಯಿತು.