ದಾಸರ ದಾಸ ಕನಕದಾಸ
ದಾಸರೊಳು ದಾಸನೆನಿಸಿ
ವ್ಯಾಸಗುರುವಿನ ಪ್ರೀತಿ ಗಳಿಸಿ
ರಾಜ ಗದ್ದುಗೆಯ ಮೋಹ ತ್ಯಜಿಸಿ
ತಿಮ್ಮಪ್ಪ *ಕನಕನಾದೆ* ನೀನಯ್ಯ..
ಕುಲ ಜಾತಿಗಳ ಭೇದವಳಿಸಿ
ಪ್ರೇಮ ಭಕ್ತಿಗಳ ಸೇವೆ ಸಲಿಸಿ
ಶ್ರೀ ಹರಿಯನೇ ಕಿಂಡಿಯಲಿ ಕರೆಸಿ
ಶ್ರೇಷ್ಠ ಭಕ್ತನಾದೆ ನೀನಯ್ಯ..
ಅಂಧ-ಶ್ರದ್ಧೆಗಳ ಹೋಗಲಾಡಿಸಿ
ಭಕ್ತಿ ಪಂಥವನು ಬೆಳೆಸಿ
ಕೀರ್ತನೆಗಳ ಜ್ಞಾನ ಹರಿಸಿ
ಹರಿಯ ಪ್ರಿಯ ಭಕುತ ನೀನಯ್ಯ..
ರಾಮಧಾನ್ಯವ ಹಾಡಿ
ಭಿಕ್ಷಕೆ ರಾಗಿಯನು ಬೇಡಿ. ತ್ಯಾಗದ ಸಂಜ್ಞೆಯನು ನೀಡಿ
ಆದಿ ಕೇಶವನ ಕಂಡೆ ನೀನಯ್ಯ..
ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ 🙏